ದೇವರ ದಾಸಿಮಯ್ಯನವರ ಬಗ್ಗೆ ತಿಳಿಯಲು ತುಂಬಾ ಇಷ್ಟ, ಆದರೆ ಎಲ್ಲೂ ಅವರ ಬಗ್ಗೆ ಹೆಚ್ಚು ವಿವರಗಳು ತಿಳಿದು ಬಂದಿಲ್ಲ. ಅವರು ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ,ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರ ಬಗ್ಗೆ ತಿಳಿಯಲು ಅಸಕ್ತಿ ಇರುವವರು ಈ ಬ್ಲಾಗ್ ಅನ್ನು ನೋಡಬಹುದು. ದೇವಲ ದಾಸಿಮಯ್ಯನವರ ಬಗ್ಗೆ ನನಗೆ ತಿಳಿದಿರುವ ಕೆಲವು ವಿವರಗಳನ್ನು ಮತ್ತು ಅವರು ರಚಿಸಿದ ಸುಂದರ ವಚನಗಳನ್ನು ಇಲ್ಲಿ ಬರೆದಿರುವೆ. ದಾಸಿಮಯ್ಯನವರು ದೇವರ ದಾಸಿಮಯ್ಯ/ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಇವರಿಂದ ದೇವಾಂಗ ಎಂಬ ಜನಾಂಗವೂ ಸಮಾಜದಲ್ಲಿ ಬಂದಿತು. ಇವರು ಶಿವನೊಲುಮೆಯ ನಂತರ ಹಿಂಸೆಯನ್ನು ಬಿಟ್ಟು ಬಟ್ಟೆ ನೇಯುವ ಕಾಯಕದಲ್ಲಿ ತೊಡಗಿಕೊಂಡು, ದೇವರ ಸ್ಮರಣೆಯಲ್ಲಿ ತನ್ನ ಕೆಲಸ ಮಾಡುತ್ತಾ ಜೀವನವನ್ನು ಕಳೆದರು. ಅಹಿಂಸೆಯಲ್ಲಿ ಜೀವನ ಸಾಗಿಸುವ ನೀತಿಯನ್ನು ಜನರಿಗೆ ತಿಳಿಸುತ್ತಾ ಬಂದರು, ತಾನೂ ಸಹ ಅದೇ ಮಾರ್ಗದಲ್ಲಿ ನಡೆಯುತ್ತಿದ್ದರು. ಅನೇಕರಿಗೆ ಗುರುವಾದರು. ಸುಮಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ದೇವರ ಬಗ್ಗೆ ಸಾರಿದರು. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು." ರಾಮನಾಥ" ಎನ್ನುವ ಹೆಸರಲ್ಲಿಯೇ ವಚನಗಳನ್ನು ರಚಿಸಿದರು.
Devala/Devara/Jedara Dasimayya-Devanga
Devanga- Jedara dasimayya/devala dasimayya/devara dasimayya . Collections of devara dasimayya's vachanas
Tuesday, November 2, 2010
Devala Dasimayya
ದೇವರ ದಾಸಿಮಯ್ಯನವರ ಬಗ್ಗೆ ತಿಳಿಯಲು ತುಂಬಾ ಇಷ್ಟ, ಆದರೆ ಎಲ್ಲೂ ಅವರ ಬಗ್ಗೆ ಹೆಚ್ಚು ವಿವರಗಳು ತಿಳಿದು ಬಂದಿಲ್ಲ. ಅವರು ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ,ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರ ಬಗ್ಗೆ ತಿಳಿಯಲು ಅಸಕ್ತಿ ಇರುವವರು ಈ ಬ್ಲಾಗ್ ಅನ್ನು ನೋಡಬಹುದು. ದೇವಲ ದಾಸಿಮಯ್ಯನವರ ಬಗ್ಗೆ ನನಗೆ ತಿಳಿದಿರುವ ಕೆಲವು ವಿವರಗಳನ್ನು ಮತ್ತು ಅವರು ರಚಿಸಿದ ಸುಂದರ ವಚನಗಳನ್ನು ಇಲ್ಲಿ ಬರೆದಿರುವೆ. ದಾಸಿಮಯ್ಯನವರು ದೇವರ ದಾಸಿಮಯ್ಯ/ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಇವರಿಂದ ದೇವಾಂಗ ಎಂಬ ಜನಾಂಗವೂ ಸಮಾಜದಲ್ಲಿ ಬಂದಿತು. ಇವರು ಶಿವನೊಲುಮೆಯ ನಂತರ ಹಿಂಸೆಯನ್ನು ಬಿಟ್ಟು ಬಟ್ಟೆ ನೇಯುವ ಕಾಯಕದಲ್ಲಿ ತೊಡಗಿಕೊಂಡು, ದೇವರ ಸ್ಮರಣೆಯಲ್ಲಿ ತನ್ನ ಕೆಲಸ ಮಾಡುತ್ತಾ ಜೀವನವನ್ನು ಕಳೆದರು. ಅಹಿಂಸೆಯಲ್ಲಿ ಜೀವನ ಸಾಗಿಸುವ ನೀತಿಯನ್ನು ಜನರಿಗೆ ತಿಳಿಸುತ್ತಾ ಬಂದರು, ತಾನೂ ಸಹ ಅದೇ ಮಾರ್ಗದಲ್ಲಿ ನಡೆಯುತ್ತಿದ್ದರು. ಅನೇಕರಿಗೆ ಗುರುವಾದರು. ಸುಮಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ದೇವರ ಬಗ್ಗೆ ಸಾರಿದರು. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು." ರಾಮನಾಥ" ಎನ್ನುವ ಹೆಸರಲ್ಲಿಯೇ ವಚನಗಳನ್ನು ರಚಿಸಿದರು.
Saturday, April 18, 2009
Devanga Kula Guru
ದೇವರ ದಾಸಿಮಯ್ಯರವರು ದೇವಾಂಗ ಜನಾಂಗದ ಕುಲಗುರುವಾಗಿರುವರು. ಇವರು ವಚನಗಳನ್ನು ರಚಿಸಿರುವ ಆದಿಕಾಲದ ಶರಣರಲ್ಲಿ ಮೊದಲಿಗರಾಗಿರುವರು. ಇವರ ಬಗ್ಗೆ ಯಾವ ಕಡೆಯೂ ಹೆಚ್ಚು ಪ್ರಚಲಿತವಿಲ್ಲ ಆಗಾಗಿ ಇವರ ಬಗ್ಗೆ ಸಾಕಷ್ಟು ವಿಷಯಗಳು ತುಂಬಾ ಆಳವಾಗಿ ತಿಳಿದಿಲ್ಲ. ಕೆಲವು ಕಡೆ ಮಾತ್ರ ಇವರ ಬಗ್ಗೆ ಹಲವು ವಿಚಾರಗಳು ಗಮನಕ್ಕೆ ಬಂದಿದೆ. ಇವರು ಹುಟ್ಟಿದ್ದು ಮುದನೂರು. ಇವರ ಜೀವನದ ಕಸುಬು ಬಟ್ಟೆ ನೇಯುವುದು. ಶಿವನ ಧ್ಯಾನ ಮತ್ತು ಅವರ ಕಾಯಕವೇ ಅವರ ಜೀವನದ ಮೂಲವಾಗಿತ್ತು. ಹೀಗೆ ಬಟ್ಟೆ ನೇಯುತ್ತಾ ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ವಚನಗಳನ್ನು ಸಾಮಾನ್ಯ ಆಡು ಭಾಷೆಯಲ್ಲಿ ರಚಿಸಿದರು. ಆಗಿನ ಪರಿಸ್ಥಿತಿಯಲ್ಲಿ ಆದ್ಯಾವುದೂ ಅಷ್ಟು ಗಣನೀಯವಾಗಿ ಜನಗಳಿಗೆ ಗೊತ್ತಾಗಲಿಲ್ಲ. ನಂತರ ಬಂದ ಶರಣರು ರಚಿಸಿದ ವಚನಗಳು ಹೆಚ್ಚು ಪ್ರಚಲಿತವಾದವು.
Monday, March 9, 2009
Subscribe to:
Posts (Atom)